ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಉದ್ಯಮ ರತ್ನ ಪಶಸ್ತಿ ಪ್ರದಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಜನವರಿ 27 , 2016
|
ಜನವರಿ 27, 2016
|
ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಉದ್ಯಮ ರತ್ನ ಪಶಸ್ತಿ ಪ್ರದಾನ
ಬೆಂಗಳೂರು :
ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ಉಪಾಹಾರ ಮಂದಿರಗಳ ಸಂಘ ಹಾಗೂ ಬೃಹತ್ ಬೆಂಗಳೂರು ಹೊಟೇಲುಗಳ ಸಂಘದ ಸಹಯೋಗದಲ್ಲಿ ಬೆಂಗಳೂರು ರವೀಂದ್ರ ಕಲಾ ಕ್ಷೇತ್ರದಲ್ಲಿ ರವಿವಾರ ನಡೆದ ಉದ್ಯಮ ರತ್ನ ಮತ್ತು ಆತಿಥ್ಯ ರತ್ನ ಪಶಸ್ತಿ ಪ್ರದಾನ ಸಮಾರಂಭದಲ್ಲಿ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಮಂತ್ರಾಲಯ ಮಠದ ಶ್ರೀ 1008 ವಿಭುದೇಂದ್ರತೀರ್ಥ ಶ್ರೀಪಾದರ ಉಪಧಿಸ್ಥಿತಿಯಲ್ಲಿ ಉಡುಪಿಯ ಹೊಟೇಲು ಉದ್ಯಮಿ ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ “ಉದ್ಯಮ ರತ್ನ ಪಶಸ್ತಿ’ ಪ್ರದಾನ ನಡೆಯಿತು.
ನಿಸ್ವಾರ್ಥ ಸೇವೆ, ದಾನ ಹಾಗೂ ಪರೋಪಕಾರದಿಂದ ಜನಾನುರಾಗಿಧಿಯಾಗಿದ್ದು, ಉಡುಪಿಯ ರಂಗಧಿಭೂಮಿ, ಜಿಲ್ಲಾ ಹೊಟೇಲ್ ಮಾಲಕರ ಸಂಘ, ತಲ್ಲೂರು ಫ್ಯಾಮಿಲಿ ಟ್ರಸ್ಟ್, ಕ್ರಿಶ್ಚಿಯನ್ ಹೈಸ್ಕೂಲ್ ಹಳೆವಿದ್ಯಾರ್ಥಿ ಸಂಘ, ಚಿಟ್ಟಾಣಿ ಅಭಿಮಾನಿಗಳ ಬಳಗ ಇತ್ಯಾದಿ ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಸೇವೆ, ಯಕ್ಷಗಾನ ಕಲಾರಂಗ, ತುಳುಕೂಟ, ಬಂಟರ ಸಂಘ, ಲಯನ್ಸ್ಕ್ಲಬ್, ಲಾಫರ್ ಕ್ಲಬ್, ನಿತ್ಯಾನಂದ ಕೋ-ಆಪ್. ಸೊಸೈಟಿ, ಭಾರತೀಯ ರೆಡ್ಕ್ರಾಸ್ ಸಂಘ, ಹಿರಿಯ ನಾಗರಿಕರಸಂಘ ಮೊದಲಾದ ಧಾರ್ಮಿಕ, ಸಾಂಸ್ಕೃತಿಕ, ವಿದ್ಯಾ ಕ್ಷೇತ್ರ, ಸಂಘ- ಸಂಸ್ಥೆ ಗಳಲ್ಲಿ ಹಾಗೂ ಹೊಟೇಲು ಉದ್ಯಮ ದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರದಾನ ಮಾಡಧಿಲಾಯಿತು.
ಅವರು ಉಡುಪಿ ಜಿಲ್ಲೆಯ 157 ಶಾಲೆಗಳ ವಿದ್ಯಾರ್ಥಿಗಳು ಹಾಗೂ ಗ್ರಂಥಾಲಯಗಳಿಗೆ 12,000ಕ್ಕೂ ಮಿಕ್ಕಿ ನೀತಿ ಬೋಧಕ ಪುಸ್ತಕಗಳನ್ನು ಉಚಿತವಾಗಿ ವಿತರಿಸಿರುತ್ತಾರೆ. ಜಯನಗರ ಶಾಸಕ ವಿಜಯ ಕುಮಾರ್, ಕರ್ಣಾಟಕ ಬ್ಯಾಂಕಿನ ಎಂಡಿ ಜಯರಾಮ ಭಟ್, ಕಿಯೋನಿಕ್ಸ್ನ ನಿರ್ದೇಶಕ ಯು.ಬಿ. ವೆಂಕಟೇಶ್, ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ಉಪಾಹಾರ ಮಂದಿರಗಳ ಸಂಘದ ಅಧ್ಯಕ್ಷ ಎಂ. ರಾಜೇಂದ್ರ, ಗೌ. ಕಾರ್ಯದರ್ಶಿ ಮಧುಕರ ಎಂ. ಶೆಟ್ಟಿ, ಪದಾಧಿಕಾರಿಗಳು, ಬೃಹತ್ ಬೆಂಗಳೂರು ಹೊಟೇಲ್ಗಳ ಸಂಘದ ಅಧ್ಯಕ್ಷ ಬಿ. ಚಂದ್ರಶೇಖರ ಹೆಬ್ಟಾರ್, ಗೌರವಾಧ್ಯಕ್ಷ ಕೆ.ಎನ್. ವಾಸುದೇವ ಅಡಿಗ, ಆತಿಥ್ಯರತ್ನ ಪ್ರಶಸ್ತಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೃಪೆ :
karavalikirana
|
|
|